ಗಾಯಕ ವಿಜಯ ಪ್ರಕಾಶ್ ಅವರು ₹ 13 ಲಕ್ಷ ಕೇಳುತ್ತಿದ್ದಾರಂತೆ. ಆದರೆ ಸಾಂಸ್ಕೃತಿಕ ಸಮಿತಿಗೆ ನಿಗದಿಪಡಿಸಿರುವ ಒಟ್ಟು ಮೊತ್ತ ₹ 40 ಲಕ್ಷ ಇದೆ ಎಂದಮೇಲೆ ಇಂತಹ ದುಬಾರಿ ಗಾಯಕರನ್ನು ಆಹ್ವಾನಿಸುವ ಅಗತ್ಯವೇನಿದೆ? ಇಷ್ಟಕ್ಕೂ ಮೈಸೂರಿನಲ್ಲಿ ನಡೆಯುತ್ತಿರುವುದು ಸಾಹಿತ್ಯ ಸಮ್ಮೇಳನವೇ ಹೊರತು ಸಂಗೀತ ಕಾರ್ಯಕ್ರಮ ಅಲ್ಲ. ಅಂದಮೇಲೆ, ಇಂಥ ಕಡೆಯೂ ಈಗಾಗಲೇ ಪ್ರಸಿದ್ಧಿ ಪಡೆದಿರುವ ಗಾಯಕರು, ನೃತ್ಯಪಟುಗಳಿಗೇ ಆಹ್ವಾನ ನೀಡುವ ಅಗತ್ಯವೇನಿದೆ?