ರಾಮಯ್ಯ ಅವರು ಈ ಚಿತ್ರದ ಕಥೆ, ಚಿತ್ರಕಥೆ ಮತ್ತು ಸಾಹಿತ್ಯದ ಹೊಣೆ ಹೊತ್ತಿದ್ದಾರೆ. ‘ಭಾರತೀಯ ಬದುಕನ್ನು ಕೃತಕಗೊಳಿಸುವ ಪ್ರಯತ್ನ ನಡೆದಿದೆ. ಹೊಸ ಬದುಕನ್ನು ಜನರ ಮುಂದಿಡುವ ಪ್ರಯತ್ನ ನಡೆದಿಲ್ಲ. ‘ಸಂಸ್ಕಾರ’ ಚಿತ್ರ ಹೊಸ ಚಳವಳಿಗೆ ನಾಂದಿ ಹಾಡಿತ್ತು. ಆ ಚಳವಳಿ ಮರೆಯಾಗಿದೆ. ಮತ್ತೆ ಅಂತಹ ವಾತಾವರಣ ಸೃಷ್ಟಿಸುವ ಸಿನಿಮಾಗಳು ಮೂಡಿಬರಬೇಕಿದೆ’ ಎಂದರು.