5 ವಿಭಾಗಗಳು: ಕನ್ನಡ ಸಾಹಿತ್ಯ ಪರಿಷತ್ ಹೊರತರುತ್ತಿರುವ ಈ ಕೃತಿಯಲ್ಲಿ 5 ವಿಭಾಗಗಳಿವೆ. ‘ಕನ್ನಡ ಚಳವಳಿ‘ ವಿಭಾಗದಲ್ಲಿ ಏಕೀಕರಣ ಚಳವಳಿಯಿಂದ ಹಿಡಿದು, ಕರ್ನಾಟಕದ ಉದಯವರೆಗೆ ವಿಶ್ಲೇಷಣೆ ಇರಲಿದೆ. ‘ಸಂಕಿರಣ’ ವಿಭಾಗದಲ್ಲಿ ಕನ್ನಡದ ಸಮಕಾಲೀನ ಸಮಸ್ಯೆಗಳು; ಸಂಶೋಧನೆ, ಹೊಸ ಬರಹ, ಭಾಷಾ ವೈವಿಧ್ಯತೆ ಕುರಿತು ಲೇಖನಗಳಿರಲಿವೆ. ‘ವರದಿ’ ವಿಭಾಗದಲ್ಲಿ ಗೋಕಾಕ್ ಚಳವಳಿ ಸೇರಿದಂತೆ ವಿವಿಧ ಚಳವಳಿಗಳ ಬಗ್ಗೆ ಮಾಹಿತಿ; ‘ಕಾವ್ಯ ವಿಮರ್ಶೆ’ ವಿಭಾಗದಲ್ಲಿ ಕುವೆಂಪು, ದ.ರಾ.ಬೇಂದ್ರೆ ಸೇರಿದಂತೆ ಪ್ರಮುಖರ ಕವಿತೆಗಳ ಬಗ್ಗೆ ವಿಮರ್ಶಾ ಲೇಖನಗಳು ಇರಲಿವೆ.