ಮೊದಲ ದಿನವಾದ ಗುರುವಾರ ಮಳೆಯಿಂದಾಗಿ ಆಟ ತಡವಾಗಿ ಆರಂಭಗೊಂಡಿತ್ತು. ಆದರೆ 12.5 ಓವರ್ಗಳ ಆಟ ಮಾತ್ರ ನಡೆದಿತ್ತು. ಆಗ ಭಾರತದ ಮೊತ್ತ ಮೂರು ವಿಕೆಟ್ಗಳಿಗೆ 17 ರನ್ ಆಗಿತ್ತು. ಸುರಂಗ ಲಕ್ಮಲ್ ದಾಳಿಗೆ ಬೆಚ್ಚಿದ ಭಾರತದ ಬ್ಯಾಟ್ಸ್ಮನ್ಗಳು ಬೇಗನೇ ಪೆವಿಲಿಯನ್ ಸೇರಿದ್ದರು. ಶುಕ್ರವಾರವೂ ಶ್ರೀಲಂಕಾದ ವೇಗಿಗಳು ಪಾರಮ್ಯ ಮೆರೆದರು. ದಿನದಾಟದಲ್ಲಿ ಉರುಳಿದ ಎರಡೂ ವಿಕೆಟ್ಗಳನ್ನು ದಾಸುನ್ ಶನಕ ಬಗಲಿಗೆ ಹಾಕಿಕೊಂಡರು.