‘ಆರ್ಥಿಕ ಸುಧಾರಣೆಗೆ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳು ಸೂಕ್ತವಾಗಿವೆ ಎನ್ನುವುದನ್ನು ಮೂಡೀಸ್ ವರದಿ ದೃಢಪಡಿಸಿದೆ. ಇದು ಭಾರತದ ಆರ್ಥಿಕತೆಗೆ ಸಕಾರಾತ್ಮಕ ಅಂಶವಾಗಿದ್ದು, ವಿದೇಶಿ ಹೂಡಿಕೆ ಆಕರ್ಷಿಸಲು ಪೂರಕವಾಗಲಿದೆ’ ಎಂದು ಮುತ್ತೂಟ್ ಫೈನಾನ್ಸ್ನ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಅಲೆಕ್ಸಾಂಡರ್ ಮುತ್ತೂಟ್ ತಿಳಿಸಿದ್ದಾರೆ.