ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರನ್ನಲ್ಲ, ಪ್ರತಿಭೆಯನ್ನು ನಂಬುವೆ

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

‘ನಾನು ದೇವರನ್ನು ನಂಬೋದಿಲ್ಲ. ಆದರೆ, ನಟ ನಾಗಾರ್ಜುನ ಅವರನ್ನು ನಂಬುತ್ತೇನೆ...’

ಈ ಮಾತು ತೆಲುಗಿನ ಖ್ಯಾತ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ಅವರದು.

ಕೆಲವರ್ಷಗಳ ಹಿಂದೆ ನಾಗಾರ್ಜುನ ಅವರು ನಾಯಕರಾಗಿದ್ದ ’ಶಿವ’ ಎನ್ನುವ ಸೂಪರ್‌ಹಿಟ್‌ ಚಿತ್ರವನ್ನು ವರ್ಮಾ ನಿರ್ದೇಶಿಸಿದ್ದರು. ಈಗ ಅದೇ ಜೋಡಿ ಇನ್ನೂ ಹೆಸರಿಡದ ಹೊಸ ಸಿನಿಮಾಗಾಗಿ ಕೆಲಸ ಮಾಡುತ್ತಿದೆ. ನಾಗಾರ್ಜುನ ಅವರದು ಸೂಪರ್‌ಕಾಪ್‌ ಪಾತ್ರ.

ಹೈದರಾಬಾದ್‌ನಲ್ಲಿ ನಡೆದ ಚಿತ್ರದ ಮುಹೂರ್ತದಲ್ಲಿ ಮಾಧ್ಯಮದವರೊಡನೆ ಮಾತನಾಡಿದ ವರ್ಮಾ, ‘ಜನರೆಲ್ಲಾ ನನ್ನಲ್ಲಿ ಸೃಜನಶೀಲತೆ ಮಾಯವಾಗಿದೆ ಎಂದು ಟೀಕಿಸುತ್ತಿದ್ದಾರೆ. ನಾನು ಇಂಥ ಮಾತುಗಳನ್ನು ಒಪ್ಪುವುದಿಲ್ಲ. ನಾನು ದೇವರನ್ನೂ ನಂಬುವುದಿಲ್ಲ. ಆದರೆ, ನಾಗಾರ್ಜುನ ಅವರ ಪ್ರತಿಭೆಯಲ್ಲಿ ನನಗೆ ನಂಬಿಕೆ ಇದೆ. ನಾನು ಏನು ಎಂಬುದನ್ನು ಈ ಚಿತ್ರ ಮತ್ತೊಮ್ಮೆ ಸಾಬೀತುಪಡಿಸಲಿದೆ’ ಎಂದು ಖಡಕ್ಕಾಗಿಯೇ ಹೇಳಿದ್ದಾರೆ.

ನಾಗಾರ್ಜುನ–ವರ್ಮಾ ಜೋಡಿಯ ಸಿನಿಮಾ ಕಣ್ತುಂಬಿಕೊಳ್ಳುವ ಆಸೆಯಲ್ಲಿದ್ದ ಅಭಿಮಾನಿಗಳು ಈ ಸುದ್ದಿಯಿಂದ ಖುಷಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT