ಧರ್ಮ ಸಂಸತ್ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಉಡುಪಿಯಲ್ಲಿ ಹಿಂದೆ ನಡೆದ ಧರ್ಮ ಸಂಸತ್ನಲ್ಲಿ ರಾಮ ಮಂದಿರದ ಬೀಗ ತೆಗೆಯಬೇಕು ಎಂಬ ನಿರ್ಣಯ ಮಾಡಲಾಗಿತ್ತು. ಆಗ ರಾಜೀವ್ ಗಾಂಧಿ ಅವರು ನಿರ್ಣಯ ಒಪ್ಪಿಕೊಂಡು, ಹಿಂದೂಗಳ ಮತ ಸಹ ಬೇಕು ಎಂಬ ಕಾರಣಕ್ಕೆ ಬೀಗ ತೆಗೆಸಿದ್ದರು. ಕಾಂಗ್ರೆಸ್ ಈಗ ಇದಕ್ಕೆ ಅನುಕೂಲಕರವಾಗಿ ಸ್ಪಂದಿಸಬಹುದು’ ಎಂದು ಹೇಳಿದರು.