‘ಯಾವುದೇ ಧಾರ್ಮಿಕ ಪಂಥವು ಜನಸಾಮಾನ್ಯರಲ್ಲಿ ಮೇಲುಗೈಯನ್ನು ಪಡೆದಾಗಲೆಲ್ಲಾ ಅದಕ್ಕೊಂದು ಆರ್ಥಿಕ ಹಿನ್ನೆಲೆಯಿರುತ್ತದೆ. ಧರ್ಮದ ಆರ್ಥಿಕ ಅಂಶವು ಮಾತ್ರ ಜನರ ಮನಸ್ಸನ್ನು ಸೆಳೆಯುತ್ತದೆಯೇ ಹೊರತು, ಅದರ ಆಧ್ಯಾತ್ಮಿಕ ಅಥವಾ ತಾತ್ವಿಕ ಅಂಶವಲ್ಲ. ನೀವು ಬೀದಿಯಲ್ಲಿ ಒಂದು ವರ್ಷ ಪರ್ಯಂತ ತತ್ವವನ್ನು ಬೋಧಿಸಿದರೂ ಕೆಲವೇ ಮಂದಿ ಅನುಯಾಯಿಗಳನ್ನೂ ನೀವು ಪಡೆಯಲಾರಿರಿ. ಆದರೆ ನೀವು ತುಂಬ ಅರ್ಥಹೀನವಾದುದನ್ನು ಬೋಧಿಸಿದರೂ ಅದರಲ್ಲಿ ಆರ್ಥಿಕ ಪ್ರಯೋಜನವಿರುವುದಾದರೆ ಇಡೀ ಜನಸಮೂಹವೇ ನಿಮ್ಮ ಹಿಂದೆ ಬರುತ್ತದೆ’ (ವಿವೇಕಾನಂದ ವಾಣಿ- ಬೆ.ರ.ರಂಗರಾಜು ಸಂಗ್ರಹ).
–ಸಿ.ಪಿ.ನಾಗರಾಜ, ಬೆಂಗಳೂರು