ಭೋಪಾಲ್: ಮುಂದಿನ ವರ್ಷದಿಂದ ಮಧ್ಯಪ್ರದೇಶದ ಶಾಲಾ ಮಕ್ಕಳಿಗೆ ರಜಪೂತ ರಾಣಿ ಪದ್ಮಾವತಿ ಕಥೆಯನ್ನು ಬೋಧಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ರಜಪೂತ ಸಮುದಾಯ ಉಜೈನಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಚೌಹಾಣ್ ಅವರು, ಕೆಲವು ದಿನಗಳಿಂದ ಪದ್ಮಾವತಿ ಸಿನಿಮಾಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮುಂದಿನ ವರ್ಷದಿಂದ ಎಲ್ಲಾ ಮಕ್ಕಳಿಗೆ ಪದ್ಮಾವತಿಯ ಇತಿಹಾಸವನ್ನು ತಿಳಿಸಬೇಕಾಗಿದೆ ಎಂದಿದ್ದಾರೆ.
ಮಹಾರಾಣಿ ಪದ್ಮಾವತಿಯ ಇತಿಹಾಸ ತಿಳಿದುಕೊಳ್ಳದ ಜನರು ಅಪ್ರಜ್ಞಾಪೂರ್ವಕವಾಗಿ ವರ್ತಿಸುತ್ತಿದ್ದಾರೆ. ಯುವಪೀಳಿಗೆ ಇತಿಹಾಸವನ್ನು ವಿರೂಪಗೊಳಿಸುತ್ತಿದೆ. ಹಾಗಾಗಿ ಮೊದಲು ಪದ್ಮಾವತಿಯ ವ್ಯಕ್ತಿತ್ವದ ಬಗ್ಗೆ ಬೋಧಿಸಬೇಕಾಗಿದೆ.
ಚೌಹಾಣ್ ಅವರು ಕೆಲವು ದಿನಗಳ ಹಿಂದೆ, ಮಧ್ಯಪ್ರದೇಶದಲ್ಲಿ ರಾಣಿ ಪದ್ಮಾವತಿಯ ಪ್ರತಿಮೆಯನ್ನು ನಿರ್ಮಿಸಲಾಗುವುದು. ಜತೆಗೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಘೋಷಿಸಿದ್ದರು.