ನೆಲಮಂಗಲ: ಅರಿಶಿನಕುಂಟೆಯ ವಿಶ್ವಶಾಂತಿ ಆಶ್ರಮದ ಸಂಸ್ಥಾಪಕ ಸದ್ಗುರು ಸಂತ ಭದ್ರಗಿರಿ ಕೇಶವದಾಸರ 20ನೇ ವರ್ಷದ ಪುಣ್ಯಾರಾಧನೆ, 36 ಅಡಿ ಎತ್ತರದ ಏಕಶಿಲಾ ವಿಜಯ ವಿಠ್ಠಲ ದೇವರಮಹಾ ಕುಂಭಾಭಿಷೇಕ ಹಾಗೂ ಪುಷ್ಪ ರಥೋತ್ಸವ ಗುರುವಾರದಿಂದ ಭಾನುವಾರದವರೆಗೆ ನಡೆಯಲಿದೆ ಎಂದು ಆಶ್ರಮದ ಅಧ್ಯಕ್ಷೆ ರಮಾ ಕೇಶವದಾಸ ತಿಳಿಸಿದ್ದಾರೆ.
ಕೀರ್ತನಾಚಾರ್ಯ ಲಕ್ಷ್ಮಣ್ ದಾಸ್ವೇಲಣ್ಕರ್ ಅವರಿಂದ ಆಶೀರ್ವಚನ, ವಿಶೇಷ ಭಜನೆ, ಅರಿಶಿನಕುಂಟೆ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ನೋಟ್ಬುಕ್ ಹಾಗೂ ಸಾಮಗ್ರಿಗಳ ವಿತರಣೆ, ಗೋಂಧಿ ಸಂಸ್ಥಾನ ಮಠದ ನಾಮದೇವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭಜನೆ ನಡೆಯಲಿವೆ ಎಂದು ಅವರು ಹೇಳಿದರು.