ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳಾ ದೌರ್ಜನ್ಯ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು,’ಕೈಗಾರಿಕೆಗಳಲ್ಲಿ ಲೈಂಗಿಕ ದೌರ್ಜನ್ಯ ನಿಯಂತ್ರಣ ಸಮಿತಿ ಇರಬೇಕು. ಕೆಲ ಕಡೆ ಈ ಸಮಿತಿಗಳೇ ಇಲ್ಲ. ಮತ್ತೊಂದೆಡೆ ಸಮಿತಿಗಳಿದ್ದರೂ ಅವು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೈಗಾರಿಕೆಗಳಲ್ಲಿ ಕಾರ್ಮಿಕ ಇಲಾಖೆ ದೂರು ಪೆಟ್ಟಿಗೆ ಹಾಕಬೇಕು. ಆ ಪೆಟ್ಟಿಗೆಗಳನ್ನೇ ಹಾಕಿಲ್ಲ’ ಎಂದು ಕಿಡಿಕಾರಿದರು.