ಬೆಂಗಳೂರಿನ ಕದಿರೇನಹಳ್ಳಿ ನಿವಾಸಿ ಖಾದರ್ ಪಾಷಾ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಶನಿವಾರ ಬಸ್ನಲ್ಲಿ ಒಬ್ಬರೇ ಬಂದಿದ್ದು, ಜಲಪಾತದ ಕೆಳಗೆ ಇಳಿಯುವಾಗ ಆಕಸ್ಮಿಕವಾಗಿ ಪ್ರಪಾತದೊಳಗೆ ಬಿದ್ದಿದ್ದಾರೆ. ನೀರಿನೊಳಗೆ ಬೀಳದೆ ಕಲ್ಲಿನ ಮೇಲೆ ಬಿದ್ದು ಗಾಯಗೊಂಡು ಎರಡು ದಿನ ಅಲ್ಲೇ ನೀರು ಕುಡಿದು ಬದುಕಿದ್ದಾರೆ. ಸೋಮವಾರ ಪ್ರಪಾತದೊಳಗೆ ತಮ್ಮ ಜರ್ಕಿನ್ ಬೀಸುತ್ತಾ ಚೀರಾಡುತ್ತಿದ್ದಾಗ ಧ್ವನಿಯನ್ನು ಕೇಳಿಸಿಕೊಂಡ ಪ್ರವಾಸಿಗರು ಪೊಲೀಸರ ಗಮನಕ್ಕೆ ತಂದಿದ್ದಾರೆ.