ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಉಪಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಮಾತನಾಡಿ, ‘ಮಾನವ ಕಾಡನ್ನು ಒತ್ತುವರಿ ಮಾಡಿದರೆ ಪ್ರಾಣಿಗಳಿಗೆ ಆವಾಸದ ಕೊರತೆ ಉಂಟಾಗಿ ನಾಡಿನತ್ತ ಬರುತ್ತವೆ. ಮಾನವನಿಗಿದ್ದಂತೆ ಪ್ರಾಣಿಗಳಿಗೂ ಜೀವಿಸುವ ಹಕ್ಕಿದೆ. ಹಾಗಾಗಿ ಪ್ರಾಣಿಗಳಿಗೆ ತೊಂದರೆ ನೀಡಬಾರದು. ಜೀವಸಂಕುಲವನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಯಾವ ಪ್ರಾಣಿಯು ಸಹ ಮನುಷ್ಯನಿಗೆ ಏಕಾಏಕಿ ತೊಂದರೆ ಉಂಟು ಮಾಡುವುದಿಲ್ಲ’ ಎಂದರು.