ಅಧಿಕಾರಕ್ಕೆ ಬಂದರೆ ಭಾಗ್ಯಗಳನ್ನು ನಿಲ್ಲಿಸುತ್ತೇವೆ ಎಂಬ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಹೇಳಿಕೆ ಕುರಿತು, ‘ಜನರಿಗೆ ಉದ್ಯೋಗ ನೀಡಲು ಹಲವು ಯೋಜನೆಗಳಿವೆ. ಆದರೆ, ಹಸಿವು ಮುಕ್ತ ಮಾಡುವುದು ಅಷ್ಟೇ ಅವಶ್ಯ. ಎಲ್ಲರಿಗೂ ಕೆಲಸ ಕೊಡಬೇಕೆಂದು ಗಾಂಧೀಜಿ ಹಿಂದೆಯೇ ಹೇಳಿದ್ದರು. ಆದಾಗ್ಯೂ ನಿರುದ್ಯೋಗ, ಬಡತನವಿದೆ. ರಾಜಕೀಯ ಕಾರಣಕ್ಕೆ ದೇವೇಗೌಡರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಅವರು ಹೇಳಿದರು.