ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯುವಕರನ್ನು ಕುರಿತು ಮಾತನಾಡುವ ಸಮಯದಲ್ಲಿ ಸೂಟ್ಕೇಸ್ ಹಿಡಿದು ಹೋಗು ವವರು ಮುಂದೆ ಹೋಗುತ್ತಾರೆ. ಪ್ರಾಮಾಣಿಕವಾಗಿ ದುಡಿಯುವ ಯುವ ಕಾರ್ಯಕರ್ತರು ಮುಗ್ಧ ರಾಗಿ ಕುಳಿತುಕೊಳ್ಳುವುದು ಸರಿಯಲ್ಲ. ರಾಜಕೀಯವಾಗಿ ಮುಂದೆ ಬರಬೇಕು ಎಂದು ಸಲಹೆ ನೀಡಿದ್ದನ್ನು ಮಾಧ್ಯಮಗಳು ತಿರುಚಿ ಸೂಟ್ಕೇಸ್ ಕೊಟ್ಟವರಿಗೆ ಟಿಕೆಟ್’ ಎಂದು ಬಿಂಬಿಸಿ ಪಕ್ಷದಲ್ಲಿ ಗೊಂದಲ ಉಂಟು ಮಾಡಿವೆ’ ಎಂದು ಹೇಳಿದರು.