ಭಾರತೀಯ ಕೌಶಲ ಅಭಿವೃದ್ಧಿ ನಿಗಮದ (ಎನ್ಎಸ್ಡಿಸಿ) ಅನುದಾನದಲ್ಲಿ ಯುವ ಪರಿವರ್ತನಾ ಅಕಾಡೆಮಿಯು ಉಚಿತವಾಗಿ ಉದ್ಯೋಗಾಧಾರಿತ ತರಬೇತಿ ಶಿಬಿರ ನಡೆಸಲಿದೆ. ಸಂಪರ್ಕಕ್ಕೆ: ಧನಲಕ್ಷ್ಮಿ 9880832391.
ಜೈಪುರ ಕಾಲು ಶಿಬಿರ
ಕರ್ನಾಟಕ ಮಾರ್ವಾಡಿ ಸಮಾಜವು ಭಗವಾನ್ ಮಹಾವೀರ ಅಂಗವಿಕಲ ಸಹಾಯತಾ ಸಮಿತಿಯ ಸಹಯೋಗದಲ್ಲಿ ಕಾಲು ಇಲ್ಲದವರಿಗೆ ಉಚಿತವಾಗಿ ಕೃತಕ ಕಾಲು ನೀಡಲಿದೆ.
ಕೃತಕ ಕಾಲು ಪಡೆಯಲು ಇಚ್ಛಿಸುವವರು ಡಿ.16ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸಮಾಜವು ಪ್ರಕಟಣೆಯಲ್ಲಿ ತಿಳಿಸಿದೆ.
ವಿಳಾಸ: ಮಹಾರಾಜ ಅಗ್ರಸೇನಾ ಭವನ, 2ನೇ ಅಡ್ಡರಸ್ತೆ, 1ನೇ ಹಂತ, ಅಶೋಕ ಸ್ತಂಭ ಸಮೀಪ, ಜಯನಗರ. ಸಂಪರ್ಕ: 9620000244
ಕುವೆಂಪು ಸಾಹಿತ್ಯ ಅಧ್ಯಯನ ಶಿಬಿರ
ಕುವೆಂಪು ಅವರ 114ನೇ ಜನ್ಮದಿನದ ಅಂಗವಾಗಿ ಕುಪ್ಪಳಿಯ ಕುವೆಂಪು ಪ್ರತಿಷ್ಠಾನವು ಅವಿರತ ಟ್ರಸ್ಟ್ ಬೆಂಗಳೂರು ಸಹಯೋಗದೊಂದಿಗೆ ಇದೇ 29, 30ರಂದು ‘ಕುವೆಂಪು ಸಾಹಿತ್ಯ ಅಧ್ಯಯನ ಶಿಬಿರ’ ಆಯೋಜಿಸಿದೆ. ಮೊದಲು ನೋಂದಾಯಿಸಿಕೊಂಡ 80 ಅಭ್ಯರ್ಥಿಗಳಿಗೆ ಅವಕಾಶ. ಉಚಿತ ಊಟ, ವಸತಿ ನೀಡಲಾಗುವುದು.
ಸಂಪರ್ಕ: contact@aviratha.org, ದೂರವಾಣಿ ಸಂಖ್ಯೆ: 9880802642