ಗೌರವ ಪ್ರಶಸ್ತಿಗೆ ಆಯ್ಕೆಯಾದವರು: ರಾಮನಗರ ಜಿಲ್ಲೆಯ ಗಂಗನರಸಮ್ಮ (ಸೋಬಾನೆ ಪದ), ದಾವಣಗೆರೆಯ ಜಿ.ಸಿದ್ಧನಗೌಡ (ಜನಪದ ಗಾಯನ), ತುಮಕೂರಿನ ಕೆ. ಆರ್. ಹೊಸಳಯ್ಯ (ವೀರಭದ್ರನ ಕುಣಿತ), ಬೆಂಗಳೂರು ನಗರದ ಎಚ್.ಕೆ ಪಾಪಣ್ಣ (ದಾಸರ ಪದ), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಕ್ಕಯ್ಯಮ್ಮ (ಮದುವೆ ಹಾಡುಗಳು), ಕೋಲಾರದ ಮಾರಮ್ಮ (ಸೋಬಾನೆ ಪದ), ಚಿಕ್ಕಬಳ್ಳಾಪುರದ ಶಾಂತಮ್ಮ (ಸಂಪ್ರದಾಯದ ಪದ), ಚಿತ್ರದುರ್ಗದ ಡಿ. ತಿಮ್ಮಪ್ಪ (ಕೋಲಾಟದ ಪದ), ಶಿವಮೊಗ್ಗದ ಕೆ.ವಾಸುದೇವಪ್ಪ (ಜನಪದ ವೈದ್ಯ), ಕೊಪ್ಪಳದ ಹನುಮವ್ವ ವಾಲೀಕಾರ (ಸಂಪ್ರದಾಯದ ಪದ), ಬಳ್ಳಾರಿಯ ಶಿವಮ್ಮ (ಬುರ್ರಕಥೆ), ಯಾದಗಿರಿಯ ಶಿವಪ್ಪ ಹೆಬ್ಬಾಳ (ಹೆಜ್ಜೆ ಕುಣಿತ), ರಾಯಚೂರಿನ ರುಕ್ಮವ್ವ (ತತ್ವಪದ), ಬೀದರದ ನಾಗಪ್ಪ ಕಾಶಂಪೂರ (ಮೊಹರಂ ಪದ).