ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಸಮೀಪದ ಹಾಲಹಳ್ಳಿ ಗ್ರಾಮದಲ್ಲಿ ಕಾಡುಹಂದಿಗಳ ದಾಳಿಗೆ ರೈತರ ಫಸಲುಗಳು ನಾಶಗೊಂಡಿವೆ. ಗ್ರಾಮದ ಮಹದೇವಮೂರ್ತಿ ಹಾಗೂ ಗುರುಮೂರ್ತಿ 2 ಎಕರೆ ಜಮೀನಿನಲ್ಲಿ ಬೆಳಿದಿದ್ದ ಟೊಮೆಟೊ ಬೆಳೆ ನಾಶಗೊಂಡಿವೆ. ಜತೆಗೆ, ಕಮರಹಳ್ಳಿ ಗ್ರಾಮದ ಶಿವರಾಮು ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ಬಾಳೆಕಂದುಗಳನ್ನು ಕಡಿದು ಹಾಕಿವೆ.