ಸಂಜಯ ಅವರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಅವರ ವಿರುದ್ಧ ಕನ್ನಡ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕೆ ಇಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇತ್ತೀಚೆಗೆ ಕಾಂಗ್ರೆಸ್ಸಿನ ಲಕ್ಷ್ಮೀ ಹೆಬ್ಬಾಳಕರ ಅವರು ಕೂಡ ಮರಾಠಿಗರ ಪರ ಘೋಷಣೆಗಳನ್ನು ಕೂಗಿದ್ದರು. ಇವರ ವಿರುದ್ಧವೂ ಅವರ ಪಕ್ಷದ ಮುಖಂಡರು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸುರೇಶ ಗವನ್ನವರ, ದೇವೇಂದ್ರ ತಳವಾರ, ಬಾಬು ಜಡಗಿ, ದೀಪಕ ಗುಡಗನಟ್ಟಿ, ಬಸವರಾಜ ಅಡವಳ್ಳಿ ಭಾಗವಹಿಸಿದ್ದರು.