ಡಿ.3ರ ರಾತ್ರಿ ಆಂಧ್ರದ ಗಡಿಯಿಂದ ಮೊಳಕಾಲ್ಮರು ತಾಲ್ಲೂಕು ಪ್ರವೇಶಿಸಿದ್ದ ಎರಡು ಆನೆಗಳು ಡಿ.8 ರವರೆಗೂ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸುತ್ತಾಡಿ, ಕೆರೆ ಅಂಗಳದಲ್ಲಿ ಅಡ್ಡಾಡಿ, ಜಮೀನುಗಳಲ್ಲಿದ್ದ ಬೆಳೆ ನಾಶ ಮಾಡಿ, ಕಾತ್ರಾಳ್ ಕೆರೆ ಮೂಲಕ ಸಿರಿಗೆರೆ ಸಮೀಪದ ಹಳವುದರ, ಅಳಗವಾಡಿಯಿಂದ ಭದ್ರಾ ಅರಣ್ಯದತ್ತ ಹೋಗಿದ್ದವು.