ಕೊರಾಪುಟ್ /ಒಡಿಶಾ: ಇಲ್ಲಿನ ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ಕಾರಣ ಗರ್ಭಿಣಿಯೊಬ್ಬರು ಆಸ್ಪತ್ರೆಯ ಕ್ಯಾಂಟಿನ್ ಬಳಿಯ ಚರಂಡಿಯಲ್ಲಿ ಮಗುವಿಗೆ ಜನ್ಮ ನೀಡಿದ ಶೋಚನೀಯ ಘಟನೆ ನಡೆದಿದೆ.
ಮಹಿಳೆಯು ಕೆಲವು ದಾಖಲೆಗಳನ್ನು ಒದಗಿಸದ ಕಾರಣ ವೈದ್ಯರು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.
ಮಹಿಳೆಯು ಹೆರಿಗೆ ನೋವು ಕಾಣಿಸಿಕೊಂಡ ಕಾರಣ ತಮ್ಮ ಪತಿಯ ಜೊತೆಗೆ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಆಗ ಪರೀಕ್ಷಿಸುವಂತೆ ಮಹಿಳೆಯು ಕೇಳಿದಾಗ ವೈದ್ಯರು ಮಮತಾ ಯೋಜನಾ ಫಲಾನುಭವಿ ಕಾರ್ಡ್ ಸೇರಿದಂತೆ ಕೆಲವು ದಾಖಲೆಗಳನ್ನು ಕೇಳಿದ್ದಾರೆ
ಮಮತಾ ಯೋಜನಾ ಫಲಾನುಭವಿ ಕಾರ್ಡ್ ನೀಡಲು ವಿಫಲವಾದ ಕಾರಣ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದ್ದಾರೆ. ಕೊನೆಗೆ ತೀವ್ರ ಹೆರಿಗೆ ನೋವಿನಿಂದ ನರಳುತ್ತಿದ್ದ ಮಹಿಳೆಯು ಕ್ಯಾಂಟಿನ್ ಬಳಿಯ ಚರಂಡಿಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.