ಹುಬ್ಬಳ್ಳಿ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಯುವಕರ ಗುಂಪೊಂದು ಶಬರಿ ನಗರದ ಸೂರ್ಯ ಕುಮಾರ ಎನ್ನುವವರ ಮೇಲೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ನಗರದ ಬೆಂಗೇರಿ ತರಕಾರಿ ಮಾರುಕಟ್ಟೆ ಬಳಿ ನಡೆದಿದೆ.
ಸೂರ್ಯ ಕುಮಾರ ಅವರ ಬೆನ್ನಿಗೆ ನಾಲ್ಕು ಕಡೆ ಚಾಕುವಿನಿಂದ ಇರಿಯಲಾಗಿದ್ದು, ತಲ್ವಾರ್ನಿಂದ ಮುಖದ ಮೇಲೆ ಹಲ್ಲೆ ನಡೆಸಲಾಗಿದೆ. ಇದರಿಂದಾಗಿ ಮೂಗು ಕತ್ತರಿಸಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ ಸಂತ್ರಸ್ತ ಯುವಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಂಪಿನಲ್ಲಿದ್ದ ಯುವಕರು ಸೀನು ಕಟ್ಟಿಮನಿ, ವಿಶಾಲ ಜಾಧವ, ವಿಜಯ ಬಿಜವಾಡ ಎಂದು ತಿಳಿದು ಬಂದಿದ್ದು, ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಿಕೊಳ್ಳಲಾಗಿದೆ.