ಮಥುರಾದಲ್ಲಿನ ಸರ್ಕಾರಿ ವಸ್ತುಸಂಗ್ರಹಾಲಯದ 144ನೇ ವಾರ್ಷಿಕೋತ್ಸವದಲ್ಲಿ ಭಾನುವಾರ ಮಾತನಾಡಿದ ಅವರು, ‘ಈ ಸಂಶೋಧನಾ ಕೇಂದ್ರ ಸ್ಥಾಪಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರದಲ್ಲಿನ ಎಲ್ಲರ ಬೆಂಬಲವೂ ಇದೆ. ಇಲ್ಲಿ ಕೃಷ್ಣನ ಯುಗದ ಗಾಯನ, ವಾದನ ಮತ್ತು ನೃತ್ಯ ಪ್ರಕಾರಗಳ ಕುರಿತು ಅಧ್ಯಯನ ಮಾಡಲಾಗುತ್ತದೆ’ ಎಂದರು.