ಭಾರತದ ರಾಜಕಾರಣದಲ್ಲಿ ಜೈಲಿಗೆ ಹೋಗಿಬಂದ ರಾಜಕೀಯ ಮುಖಂಡರು, ಶಾಸಕರು, ಮಂತ್ರಿಗಳಿಗೇನೂ ಕೊರತೆ ಇಲ್ಲ. ಇಂದಿರಾ ಗಾಂಧಿಯವರೂ ಜೈಲಿಗೆ ಹೋಗಿ ಬಂದವರೇ. ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಕರುಣಾನಿಧಿ ಮತ್ತು ಜಯಲಲಿತಾ ಅವರೂ ಆರೋಪ ಹೊತ್ತು ಜೈಲಿಗೆ ಹೋದವರಲ್ಲವೇ? ಬಿಹಾರದಲ್ಲಿ ಕಾಂಗ್ರೆಸ್ ಮಿತ್ರಪಕ್ಷ ಆರ್.ಜೆ.ಡಿ. ಮುಖಂಡ ಲಾಲು ಪ್ರಸಾದ್, ಭ್ರಷ್ಟಾಚಾರದ ಕಾರಣಕ್ಕೆ ಜೈಲಿಗೆ ಹೋಗಿಬಂದಿಲ್ಲವೇ? ಡಿ.23ರಂದು ಅವರನ್ನು ಪುನಃ ಬಂಧಿಸಲಾಗಿದೆ.