ಬೆಂಗಳೂರು: ‘ದೈವಜ್ಞ ಸಮಾಜದ ಅಭಿವೃದ್ಧಿಗೆ ಮುಂದಿನ ಬಜೆಟ್ನಲ್ಲಿ ವಿಶೇಷ ಅನುದಾನ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸುತ್ತೇನೆ’ ಎಂದು ಗೃಹಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದರು.
ಬೆಂಗಳೂರು ದೈವಜ್ಞ ಯುವಕ ಸಂಘವು ಶನಿವಾರ ಹಮ್ಮಿಕೊಂಡಿದ್ದ ದೈವಜ್ಞ ಯುವ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ದೈವಜ್ಞ ಸಮಾಜಕ್ಕೂ ನಿವೇಶನ ನೀಡಲಾಗಿದೆ. ಆ ಜಾಗವನ್ನು ವಿದ್ಯಾರ್ಥಿನಿಲಯಕ್ಕೆ ಅಥವಾ ಸಂಘದ ಕಟ್ಟಡ ನಿರ್ಮಿಸಲು ಬಳಸಿಕೊಳ್ಳಬಹುದು’ ಎಂದರು.