ಒಮ್ಮೆ ನನಗೆ ಕೌಂಟರಿನಲ್ಲಿ ಸ್ವೀಕರಿಸಿದ ಹಣದ ಲೆಕ್ಕ ತಾಳೆಯಾಗಲಿಲ್ಲ. ಒತ್ತಡಕ್ಕೆ ಸಿಲುಕಿದ ನನ್ನ ಮನಸ್ಸು ಮಾತಿನ ಮೇಲಿನ ಹಿಡಿತವನ್ನು ಕಳೆದುಕೊಂಡಿತ್ತು. ಜಂಬೂಸ ಅವರಿಗೆ ’ನೀನಲ್ಲದೆ ಇಲ್ಲಿಗೆ ಮತ್ತ್ಯಾರೂ ಬರಲು ಸಾಧ್ಯವಿಲ್ಲ...’ ಎಂದು ಗದರಿಬಿಟ್ಟೆ. ಅವರು ಇದರಿಂದ ಸಿಟ್ಟಿಗೇಳಲಿಲ್ಲ, ನೊಂದುಕೊಂಡರು. ’ಮೂವತ್ತು ವರ್ಷದಿಂದ ಇಲ್ಲಿ ದುಡಿಯುತ್ತಿದ್ದೇನೆ ಸಾರ್. ಯಾವತ್ತೂ ಇಂತಹ ಮಾತನ್ನು ಕೇಳಿರಲಿಲ್ಲ’ ಅಂದರು.