ಪದ್ಮಾವತಿ ಎಂಬ ಮಹಾರಾಣಿಯೊಬ್ಬಳು ಇತಿಹಾಸದಲ್ಲಿ ಇದ್ದಿರಬಹುದು. ಆಕೆ ಬೆಂಕಿಯಲ್ಲಿ ದಹಿಸಿಕೊಂಡಿರಬಹುದಾದರೂ ಆ ಘಟನೆ, ಮಲಿಕ್ ಮೊಹಮ್ಮದ್ ಜಯಸಿ ರಚಿಸಿರುವ ಕಾವ್ಯದ ಮಾದರಿಯಲ್ಲೇ ಜರುಗಿರುವುದಿಲ್ಲ. ಐತಿಹ್ಯಗಳಿಂದ ಕವಿ ಸ್ಫೂರ್ತಿ ಪಡೆದಿದ್ದಾನು. ಸಂಜಯ್ ಲೀಲಾ ಬನ್ಸಾಲಿ ಈ ಚಲನಚಿತ್ರಕ್ಕೆ ಆ ಕಾವ್ಯದಿಂದ ಪ್ರೇರಣೆ ಪಡೆದಿರಬಹುದು. ಜನರ ಅಂದಂದಿನ ನಂಬಿಕೆ, ಸಾಹಸ, ಸಾಧನೆ... ಹಾಗೆಯೇ ಅವಿದ್ಯೆ, ಮೂಢಾಚರಣೆ, ಅರ್ಥರಾಹಿತ್ಯಗಳಿಂದ ಇತಿಹಾಸ ಘಟಿಸುತ್ತಲೇ ಇರುತ್ತದೆ. ಅವೆಲ್ಲಾ ನಮ್ಮ ಇಂದಿನ ಜೀವನಕ್ಕೆ ನೇರವಾಗಿ ಮೌಲ್ಯಗಳನ್ನೊದಗಿಸುವುದಿಲ್ಲ. ಅವು ಬರುವುದು ಕವಿ-ಕಲಾಕಾರನ ವೈಯಕ್ತಿಕ ಪ್ರತಿಭೆಯಿಂದ. ಅಭಿನಂದಿಸಬೇಕಾದುದು ಅಥವಾ ಖಂಡಿಸಬೇಕಾದುದು ಅದನ್ನೇ ಹೊರತು ಇತಿಹಾಸವನ್ನಲ್ಲ.