ಸುತ್ತಲಿನ ರಾಂಪುರ, ರಾಜೂರು, ಕೊಡಗನೂರು, ವೀರಾಪುರ, ಸೂಡಿ, ಹಿರೇಕೊಪ್ಪ ಸೇರಿ ಹಲವು ಹಳ್ಳಿಗಳ ಎರೆ ಭೂಮಿಯಲ್ಲಿ ಅಂದಾಜು 2 ಸಾವಿರ ಎಕರೆ ಜೋಳ ಹಾಗೂ 600 ಎಕರೆ ಕಡಲೆ ಬಿತ್ತನೆ ಮಾಡಿದ್ದು, ತೇವಾಂಶದ ಕೊರತೆಯಿಂದ ಬೆಳೆ ಒಣಗುತ್ತಿವೆ. ಇದರಿಂದ ಕಂಗಾಲಾಗಿರುವ ರೈತರು ತಮ್ಮ ಹೊಲಗಳಲ್ಲಿ ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳ ಮೊರೆ ಹೋಗಿದ್ದಾರೆ.