‘ಬಿ.ಎಸ್. ಯಡಿಯೂಪ್ಪ ಅವರು ಗೋವಾ ಮುಖ್ಯಮಂತ್ರಿ ಮನವೊಲಿಸಿ ಒಪ್ಪಿಗೆ ಪತ್ರವನ್ನು ತಂದಿದ್ದರು. ಅದರ ಆಧಾರದ ಮೇಲೆ, ಮಹದಾಯಿ ಸಮಸ್ಯೆ ಇತ್ಯರ್ಥಪಡಿಸಲು ಪಾರದರ್ಶಕ ಹಾಗೂ ಸೌಹಾರ್ದಯುತ ಪ್ರಯತ್ನ ಮಾಡುವುದನ್ನು ಬಿಟ್ಟು ಅದಕ್ಕೆ ಕಲ್ಲು ಹಾಕುತ್ತಿದ್ದೀರಿ. ಬಿಜೆಪಿ ವಿರುದ್ಧ ಜನರನ್ನು ಎತ್ತಿ ಕಟ್ಟುವ ನಾಟಕ ಆಡುತ್ತಿದ್ದೀರಿ’ ಎಂದು ಅವರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.