ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಈ ರೀತಿಯ ಸಾಂಕೇತಿಕ ಪ್ರತಿಭಟನೆಯಿಂದ ತಲ್ಲಣಗೊಳ್ಳಬೇಕಾಗಿಲ್ಲ. ಪಾರದರ್ಶಕತೆ ಕುರಿತು ಎಂಥ ಪ್ರಶ್ನೆಗಳು ಬಂದರೂ ನಾವು ಸ್ವಾಗತಿಸಲೇಬೇಕು. ಅದು ಇಂಥಕಡೆ ಬರಬೇಕು, ಇಂಥ ಕಡೆ ಬರಬಾರದು ಎಂದು ಯೋಚಿಸುವ ಅಗತ್ಯವಿಲ್ಲ. ಇಂತಹದ್ದು ಹೆಚ್ಚು ಹೆಚ್ಚು ಆಂತರಿಕ ಸಂವಾದವಾಗಿಯೂ ಬೆಳೆಯಬೇಕು.