ಕಲಾ ಪ್ರದರ್ಶನ: ಕಾವ್ಯ ಸಂಗೀತ ಗುರುಕುಲ ಬೆಂಗಳೂರು ಅವರ ಸಮೂಹ ಸಂಗೀತ, ಕಲಗುರ್ಕಿಯ ಡೊಳ್ಳಿನ ಸಂಘದ ಡೊಳ್ಳು ಪದ, ಅಕ್ಕಮಹಾದೇವಿ ಮಹಿಳಾ ತಂಡದ ಸಂಪ್ರದಾಯ ಪದಗಳು, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ರಾಧಾಕೃಷ್ಣ ಹಾಗೂ ದೇವಿ ನೃತ್ಯರೂಪಕ, ಸಚಿನ ದೇಸಾಯಿ ತಂಡದ ಲಾವಣಿ ಹಾಡುಗಳು, ಅಮ್ಚೆ ಮೂಳ್ ಸಿದ್ದಿ ಕಲಾ ತಂಡ ಉತ್ತರ ಕನ್ನಡದ ಡಮಾಮಿ ನೃತ್ಯ, ಸೂತ್ರದ ಗೊಂಬೆಯಾಟ ಹೊಂಗಿರಣ ಗೊಂಬೆಯಾಟ ಕಲಾ ತಂಡ ಹಳಿಯಾಳ, ಅವ್ವಪ್ಪ ಅರಳಿಚಂಡಿಯ ಶ್ರೀಕೃಷ್ಣ ಪಾರಿಜಾತ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಸಿದ್ದು ಬಿರಾದಾರ ಸ್ವಾಗತಿಸಿದರು. ಕೆ.ಎನ್.ಅಲ್ಲಾಪುರ ಮತ್ತು ಅಕ್ಷಯ ನಾಗ್ರೇಶಿ ನಿರೂಪಿಸಿದರು.