ರಾಷ್ಟ್ರೈಕ್ಯಕ್ಕೆ ಭಂಗಬಾರದಂತೆ ಭಾಷಾ ಪ್ರಶ್ನೆಗೆ ಪರಿಹಾರ ಅಗತ್ಯ: ಪ್ರಧಾನಿ ಇಂದಿರಾ
ಮದ್ರಾಸ್, ಫೆ. 3– ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಜನಾಂಗ ಭಾಗವಹಿಸಲು ಹೆಚ್ಚಿನ ಅವಕಾಶ ದೊರಕುವಂತೆ ಹಾಗೂ ರಾಷ್ಟ್ರದ ಐಕ್ಯವನ್ನು ಹಾಗೆಯೇ ಉಳಿಸಲು ಅನುಕೂಲವಾಗುವಂತೆ ಭಾಷಾ ಪ್ರಶ್ನೆಗೆ ಯಾವುದಾದರೂ ಪರಿಹಾರ ಕಾಣಬೇಕಾಗಿದೆ ಎಂದು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ಇಂದು ಇಲ್ಲಿ ವರದಿಗಾರರಿಗೆ ಹೇಳಿದರು.