ಕಬ್ಬಿನಗದ್ದೆ ಗ್ರಾಮದ ಕೃಷ್ಣಯ್ಯ ಅವರ ಪುತ್ರನಾದ ರಮೇಶ (30) ಹಾಗೂ ಮೊಮ್ಮಗ ಸಂದೇಶ್ (14) ಮೃತರು. ಗ್ರಾಮದ ಶ್ರೀಪತಿ ಎಂಬುವವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ನ ಬಳಿಗೆ, ರಮೇಶನ ಸೋದರಿಯ ಮಗನಾದ ಶನಿವಾರ ಮಧ್ಯಾಹ್ನದ ಸಂದೇಶ್ ತೆರಳಿದ್ದು, ಈ ವೇಳೆ ಕಾಫಿ ತೋಟದಲ್ಲಿದ್ದ ಕೃಷಿ ಹೊಂಡದಲ್ಲಿ ಪ್ಲಾಸ್ಟಿಕ್ ಕ್ಯಾನೊಂದು ತೇಲಾಡುತ್ತಿದ್ದು, ಅದನ್ನು ತೆಗೆಯಲು ಯತ್ನಿಸಿದ ಸಂದೇಶ್ ನೀರಿಗೆ ಬಿದ್ದಿದ್ದಾನೆ. ಇದನ್ನು ಕಂಡ ರಮೇಶ್ ಕೂಡ ನೀರಿಗಿಳಿದಿದ್ದು, ಈಜಲಾಗದೆ ಮೃತಪಟ್ಟಿದ್ದಾರೆ.