ಭಾರತದ ಸಾಹಿತ್ಯ, ಇತಿಹಾಸ, ಹತ್ತಾರು ವಿಜ್ಞಾನದ ಆವಿಷ್ಕಾರಗಳು, ಪ್ರದರ್ಶನಗಳು ವೀಕ್ಷಕರಲ್ಲಿ ಕುತೂಹಲ ಮೂಡಿಸಿದವು. ವಿದ್ಯಾರ್ಥಿಗಳು ವೀಕ್ಷಕರ ಪ್ರಶ್ನೆಗಳಿಗೆ ಪಟಪಟನೆ ಉತ್ತರಿಸಿದರು. ನಂತರ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಅಶೋಕ ಉಂಡಿಯವರಿಂದ ಪವಾಡ ಬಯಲು ಕಾರ್ಯಕ್ರಮ ಜರುಗಿತು. ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ಪುರಾಣಿಕಮಠ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಎಂ.ಬಿ.ಸೋಮನಕಟ್ಟಿ, ಸಂಗಪ್ಪ ಮೆಣಸಗಿ, ಸಿ.ಕೆ.ಹಿರೇಮಠ, ಸಿಬ್ಬಂದಿ ಇದ್ದರು.