ಅದೇದಿನ ಕುಮಟಾದಲ್ಲಿ ಆಯೋಜಿಸಲಾಗಿರುವ ‘ನವಶಕ್ತಿ ಸಮಾವೇಶ’ದಲ್ಲಿ ಮಧ್ಯಾಹ್ನ 3ಕ್ಕೆ ಭಾಗವಹಿಸುವರು. ಭಟ್ಕಳ, ಕುಮಟಾ ಮತ್ತು ಕಾರವಾರ– ಅಂಕೋಲಾ ವಿಧಾನಸಭಾ ಕ್ಷೇತ್ರಗಳ ಪ್ರತಿ ಬೂತ್ನಿಂದ ವಿವಿಧ ಮೋರ್ಚಾಗಳ ತಲಾ ಒಂಬತ್ತು ಮುಖಂಡರು ಇದರಲ್ಲಿ ಭಾಗವಹಿಸಲಿದ್ದಾರೆ. ಸುಮಾರು 6,500 ಜನರು ಅಲ್ಲಿ ಇರಲಿದ್ದಾರೆ. ಭಟ್ಕಳದಲ್ಲಿ ಅಂಗಡಿ ತೆರವು ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಮಾಲೀಕ ರಾಮಚಂದ್ರ ನಾಯಕ್ ಕುಟುಂಬದವರನ್ನೂ ಇದೇ ವೇದಿಕೆಗೆ ಕರೆಸಿ ಸಾಂತ್ವನ ಹೇಳಲಿದ್ದಾರೆ ಎಂದು ಮಾಹಿತಿ ನೀಡಿದರು.