ಎಂ.ಡಿ. ನಂಜುಂಡಸ್ವಾಮಿ ತೀರಿಕೊಂಡಾಗ, ‘ಸರ್ವಾಧಿಕಾರಿ ಧೋರಣೆ ಅವರ ದೋಷವಾಗಿತ್ತು’ ಎಂದಿದ್ದರವರು. ಪುಟ್ಟಣ್ಣಯ್ಯನವರ ದೌರ್ಬಲ್ಯ– ಹೆಚ್ಚು ಮಾತನಾಡುವುದು, ತಮ್ಮ ಮಾತಿನ ಬಗ್ಗೆ ತಾವೇ ಮೋಹಗೊಳ್ಳುವುದು. ರಾಜಕೀಯ ಚಪಲ ಬಿಟ್ಟು, ಟ್ರೇಡ್ ಯೂನಿಯನ್ ಶೈಲಿಗಿಂತ ಭಿನ್ನವಾಗಿ, ಒಂದಿಷ್ಟು ರಚನಾತ್ಮಕವಾಗಿಯೂ ರೈತ ಚಳವಳಿಯನ್ನು ಕಟ್ಟಿದ್ದಿದ್ದರೆ ಪುಟ್ಟಣ್ಣಯ್ಯ ಇನ್ನಷ್ಟು ಉಪಯುಕ್ತರಾಗುತ್ತಿದ್ದರು.