ಬೆಳೆ ವಿಮೆ ಪರಿಹಾರ ಬಾಕಿ ಉಳಿಯಲು ಮುಖ್ಯ ಕಾರಣಗಳೆಂದರೆ, ಬಹು ಕಟಾವು ಬೆಳೆಗಳ ಇಳುವರಿ ವ್ಯತ್ಯಾಸದ ಬಗ್ಗೆ ವಿಮಾ ಸಂಸ್ಥೆಗಳು ತಕರಾರು ತೆಗೆದಿರುವುದು( ₹ 163.48 ಕೋಟಿ), ಭತ್ತ ಮತ್ತು ಅಕ್ಕಿ ಎಂಬ ಪದಗಳನ್ನು ಸೇರಿಸಿರುವುದರಿಂದ ಉಂಟಾದ ಗೊಂದಲ( ₹ 63.65 ಕೋಟಿ), ರೈತರ ಬ್ಯಾಂಕ್ ಖಾತೆ ಸಂಖ್ಯೆಗಳನ್ನು ತಪ್ಪಾಗಿ ಬರೆದಿರುವುದರಿಂದ( ₹ 11.3 ಕೋಟಿ) ಮತ್ತು ಬೆಳೆ ಕಟಾವು ಪ್ರಯೋಗದಲ್ಲಿ ಸಣ್ಣ– ಪುಟ್ಟ ಲೋಪ ದೋಷ ಇರುವುದರಿಂದ (₹7.16 ಕೋಟಿ) ಪಾವತಿ ಆಗಿಲ್ಲ ಎಂದು ಸಚಿವರು ಮಾಹಿತಿ ನೀಡಿದರು.