<p><strong>ಬೆಂಗಳೂರು:</strong> ಶತಮಾನದ ಅತಿ ಸುದೀರ್ಘ ‘ಕೆಂಪು’ ಚಂದ್ರ ಗ್ರಹಣ ಇಂದು (ಶುಕ್ರವಾರ) ರಾತ್ರಿ 11.44 ಕ್ಕೆ ಆರಂಭಗೊಂಡು ಶನಿವಾರ ಬೆಳಗ್ಗಿನ ಜಾವ 3.48 ಕ್ಕೆ ಮುಗಿಯುತ್ತದೆ.</p>.<p>ರಾಜ್ಯದ ಎಲ್ಲ ಕಡೆಗಳಲ್ಲಿ ಗ್ರಹಣ ವೀಕ್ಷಿಸಬಹುದು. ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಕೊಂಚ ಕೆಂಪು ಬಣ್ಣದಿಂದ ಕಂಗೊಳಿಸುತ್ತದೆ.</p>.<p><strong>ಗ್ರಹಣದ ಅವಧಿ:</strong> 3 ಗಂಟೆ 48 ನಿಮಿಷ</p>.<p><strong>ಆರಂಭ :</strong> ರಾತ್ರಿ 11.54</p>.<p><strong>ಸಂಪೂರ್ಣ ಗ್ರಹಣ:</strong> ಶನಿವಾರ ಮುಂಜಾನೆ 1.51</p>.<p><strong>ಗ್ರಹಣ ಅಂತ್ಯ:</strong> ಮುಂಜಾನೆ 3.48</p>.<p><strong>ಎಲ್ಲೆಲ್ಲಿ ವೀಕ್ಷಿಸಬಹುದು:</strong>ಕರ್ನಾಟಕದ ಎಲ್ಲ ಪ್ರದೇಶಗಳು. ಭಾರತ, ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ ಅಮೆರಿಕದ ಪೂರ್ವಭಾಗ, ಏಷ್ಯಾ ಖಂಡದ ಎಲ್ಲ ದೇಶಗಳು ಮತ್ತು ಅಂಟಾರ್ಟಿಕ.</p>.<p><strong>*</strong> ಮಂಗಳ ಗ್ರಹ ಭೂಮಿಗೆ ಸಮೀಪ ಬರುವುದರಿಂದ ಪ್ರಕಾಶಮಾನವಾಗಿ ಗೋಚರಿಸುತ್ತದೆ</p>.<p><strong>*</strong> ಗ್ರಹಣವನ್ನು ಬರಿಗಣ್ಣಿನಿಂದ ನೋಡಬಹುದು. ಹೆಚ್ಚು ಸ್ಪಷ್ಟವಾಗಿ ನೋಡಬೇಕೆಂದರೆ ಟೆಲಿಸ್ಕೋಪ್ ಬಳಸಬಹುದು</p>.<p><strong>ಹವಾಮಾನ</strong></p>.<p>ರಾಜ್ಯದಲ್ಲಿ ಸ್ವಲ್ಪಮಟ್ಟಿಗೆ ಮೋಡ ಕವಿದ ವಾತಾವರಣ ಇರಲಿದೆ. ಆದರೆ, ಚಲನೆಯಲ್ಲಿರುವ ಮೋಡವಾದ್ದರಿಂದ ಕೆಲವೊಮ್ಮೆ ಆಕಾಶ ತಿಳಿಯಾಗಿ ಚಂದ್ರ ಸ್ಪಷ್ಟವಾಗಿ ಗೋಚರಿಸುವ ಸಾಧ್ಯತೆ ಇದೆ</p>.<p><strong>–ಶ್ರೀನಿವಾಸರೆಡ್ಡಿ, ನಿರ್ದೇಶಕ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಶತಮಾನದ ಅತಿ ಸುದೀರ್ಘ ‘ಕೆಂಪು’ ಚಂದ್ರ ಗ್ರಹಣ ಇಂದು (ಶುಕ್ರವಾರ) ರಾತ್ರಿ 11.44 ಕ್ಕೆ ಆರಂಭಗೊಂಡು ಶನಿವಾರ ಬೆಳಗ್ಗಿನ ಜಾವ 3.48 ಕ್ಕೆ ಮುಗಿಯುತ್ತದೆ.</p>.<p>ರಾಜ್ಯದ ಎಲ್ಲ ಕಡೆಗಳಲ್ಲಿ ಗ್ರಹಣ ವೀಕ್ಷಿಸಬಹುದು. ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಕೊಂಚ ಕೆಂಪು ಬಣ್ಣದಿಂದ ಕಂಗೊಳಿಸುತ್ತದೆ.</p>.<p><strong>ಗ್ರಹಣದ ಅವಧಿ:</strong> 3 ಗಂಟೆ 48 ನಿಮಿಷ</p>.<p><strong>ಆರಂಭ :</strong> ರಾತ್ರಿ 11.54</p>.<p><strong>ಸಂಪೂರ್ಣ ಗ್ರಹಣ:</strong> ಶನಿವಾರ ಮುಂಜಾನೆ 1.51</p>.<p><strong>ಗ್ರಹಣ ಅಂತ್ಯ:</strong> ಮುಂಜಾನೆ 3.48</p>.<p><strong>ಎಲ್ಲೆಲ್ಲಿ ವೀಕ್ಷಿಸಬಹುದು:</strong>ಕರ್ನಾಟಕದ ಎಲ್ಲ ಪ್ರದೇಶಗಳು. ಭಾರತ, ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ ಅಮೆರಿಕದ ಪೂರ್ವಭಾಗ, ಏಷ್ಯಾ ಖಂಡದ ಎಲ್ಲ ದೇಶಗಳು ಮತ್ತು ಅಂಟಾರ್ಟಿಕ.</p>.<p><strong>*</strong> ಮಂಗಳ ಗ್ರಹ ಭೂಮಿಗೆ ಸಮೀಪ ಬರುವುದರಿಂದ ಪ್ರಕಾಶಮಾನವಾಗಿ ಗೋಚರಿಸುತ್ತದೆ</p>.<p><strong>*</strong> ಗ್ರಹಣವನ್ನು ಬರಿಗಣ್ಣಿನಿಂದ ನೋಡಬಹುದು. ಹೆಚ್ಚು ಸ್ಪಷ್ಟವಾಗಿ ನೋಡಬೇಕೆಂದರೆ ಟೆಲಿಸ್ಕೋಪ್ ಬಳಸಬಹುದು</p>.<p><strong>ಹವಾಮಾನ</strong></p>.<p>ರಾಜ್ಯದಲ್ಲಿ ಸ್ವಲ್ಪಮಟ್ಟಿಗೆ ಮೋಡ ಕವಿದ ವಾತಾವರಣ ಇರಲಿದೆ. ಆದರೆ, ಚಲನೆಯಲ್ಲಿರುವ ಮೋಡವಾದ್ದರಿಂದ ಕೆಲವೊಮ್ಮೆ ಆಕಾಶ ತಿಳಿಯಾಗಿ ಚಂದ್ರ ಸ್ಪಷ್ಟವಾಗಿ ಗೋಚರಿಸುವ ಸಾಧ್ಯತೆ ಇದೆ</p>.<p><strong>–ಶ್ರೀನಿವಾಸರೆಡ್ಡಿ, ನಿರ್ದೇಶಕ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>