ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿಂಬೆ ಕೆ.ಜಿಗೆ ₹ 20 ಏರಿಕೆ

ಹಣ್ಣುಗಳ ದರ ಹೆಚ್ಚಳ, ತರಕಾರಿ ಧಾರಣೆ ಇಳಿಕೆ
Last Updated 20 ಮಾರ್ಚ್ 2018, 9:49 IST
ಅಕ್ಷರ ಗಾತ್ರ

ಹಾಸನ: ವಾರದ ಹಿಂದ ಒಂದು ಕೆ.ಜಿ. ದಾಳಿಂಬೆ ಹಣ್ಣು 120ಕ್ಕೆ ಮಾರಾಟವಾಗುತ್ತಿತ್ತು, ಹಬ್ಬದ ಹಿನ್ನೆಲೆ ಈವಾರ ಒಂದು ಕೆ.ಜಿ. ₹ 140ಕ್ಕೆ ಮಾರಾಟವಾಗುತ್ತಿದ್ದು, ಕೆ.ಜಿ. ಗೆ ₹ 20 ಏರಿಕೆಯಾಗಿದೆ.

ಮಹಾರಾಷ್ಟ್ರದಿಂದ ಹಾಸನ ಮಾರುಕಟ್ಟೆಗೆ ದಾಳಿಂಬೆ ಆಮದು ಮಾಡಿಕೊಳ್ಳಲಾಗುತ್ತಿದ್ದು, ಹಬ್ಬದ ಕಾರಣ ಬೇಡಿಕೆ ಹೆಚ್ಚಾಗಿದೆ. ಪೂರೈಕೆ ಪ್ರಮಾಣ ಕಡಿಮೆಯಾಗಿದ್ದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಮಹಮ್ಮದ್‌ ಸಫಿ.

ಗರದಲ್ಲಿ ಕೆಲವೇ ದಿನಗಳ ಹಿಂದೆ ಒಂದು ಕೆ.ಜಿ. ಸೇಬು ₹ 120ಕ್ಕೆ ಮಾರಾಟವಾಗುತ್ತಿದ್ದು, ಸೋಮವಾರ ಒಂದು ಕೆ.ಜಿ. ₹ 140ಕ್ಕೆ ಮಾರಾಟವಾಗುತ್ತಿದ್ದು,
₹ 20 ಏರಿಕೆಯಾಗಿದೆ. ಜಮ್ಮು ಮತ್ತು ಕಾಶ್ಮೀರದಿಂದ ಹಾಸನದ ಮಾರುಕಟ್ಟೆಗೆ ಸೇಬು ಬರುತ್ತಿದ್ದು, ಹಬ್ಬದ ಪ್ರಯುಕ್ತ ಬೇಡಿಕೆ ಹೆಚ್ಚಾಗಿರುವ ಕಾರಣ ಬೆಲೆಯೂ ಏರಿಕೆಯಾಗಿದೆ.

ಉಳಿದಂತೆ ಬಾಳೆಹಣ್ಣು ₹ 20 ಏರಿಕೆಯಾಗಿದ್ದು, ಒಂದು ಕೆ.ಜಿ. ₹ 70ಕ್ಕೆ ಮಾರಾಟವಾಗುತ್ತಿದೆ. ವಾರದ ಹಿಂದೆ ಬಾಳೆಹಣ್ಣು ಒಂದು ಕೆ.ಜಿ. 50ಕ್ಕೆ ಮಾರಾಟವಾಗುತ್ತಿತ್ತು. ಸಪೋಟ ಒಂದು ಕೆ.ಜಿ. ₹ 60 ರಿಂದ 80, ಮೂಸಂಬೆ ಕೆಜಿ ಗೆ ₹ 80, ಸೀತಾಫಲ ಕೆ.ಜಿಗೆ ₹ 100, ಕಿತ್ತಳೆ ಹಣ್ಣು ಕೆ.ಜಿ. ₹ 80, ದಾಳಿಂಬೆ ಕೆ.ಜಿ.ಗೆ ₹ 120, ಕಲ್ಲಂಗಡಿ ಹಣ್ಣು ಕೆ.ಜಿ.ಗೆ ₹ 20ಕ್ಕೆ ಮಾರಾಟವಾಗುತ್ತಿತ್ತು.

ಕಳೆದ ಕೆಲ ದಿನಗಳ ಹಿಂದೆ ಒಂದು ಕೆ.ಜಿ. ₹ 20ಕ್ಕೆ ಮಾರಾಟವಾಗುತ್ತಿದ್ದ ಈರುಳ್ಳಿ ಈವಾರ ಕೆ.ಜಿ.ಗೆ ₹ 15ಕ್ಕೆ ಮಾರಾಟವಾಗುತ್ತಿದ್ದು, ₹ 5 ಕಡಿಮೆಯಾಗಿದೆ. ದಪ್ಪ ಮೆಣಸಿನಕಾಯಿ ಬೆಲೆಯೂ ಕೆ.ಜಿ.ಗೆ ₹ 20 ಕುಸಿತ ಕಂಡಿದ್ದು, ₹ 40ಕ್ಕೆ ಮಾರಾಟವಾಗುತ್ತಿದೆ. ದಪ್ಪ ಮೆಣಸಿಕಾಯಿ ಬೆಂಗಳೂರು ಮತ್ತು ಚನ್ನರಾಯಪಟ್ಟಣದಿಂದ ಹಾಸನ ಮಾರುಕಟ್ಟೆಗೆ ಬರುತ್ತಿದೆ.

ಹೀರೇಕಾಯಿ ಕೆ.ಜಿ.ಗೆ ₹ 40, ಹೂ ಕೋಸು ₹ 20, ಟೊಮೆಟೊ ಒಂದು ಕೆ.ಜಿ. ₹ 10, ಒಂದು ಕೆ.ಜಿ. ಎಲೆ ಕೋಸು ₹ 15, ಅವರೆಕಾಯಿ ಕೆಜಿ.ಗೆ ₹ 40, ಕ್ಯಾರೆಟ್‌ ಒಂದು ಕೆಜಿ ಗೆ ₹ 30, ಬೆಂಡೇಕಾಯಿ ಒಂದು ಕೆ.ಜಿ. ಗೆ ₹ 30, ಆಲೂಗೆಡ್ಡೆ ಒಂದು ಕೆ.ಜಿ.ಗೆ ₹ 20, ನುಗ್ಗೆಕಾಯಿ ಒಂದು ಕೆ.ಜಿ.ಗೆ ₹ 50ರಂತೆ ಮಾರಾಟವಾದರೆ, ಕೊತ್ತಂಬರಿ ಪಾಲಾಕ್, ಲಾಳಿ, ಕರಿಬೇವು ಮತ್ತು ದಂಟು ಸೊಪ್ಪನ್ನು ಒಂದು ಕಂತೆಗೆ ₹ 5 ರಂತೆ ಮಾರಾಟಮಾಡಲಾಗುತ್ತಿದೆ. ತರಕಾರಿ ಬೆಳೆಯಲ್ಲಿ ಹೆಚ್ಚಿನ ಏರಿಳಿತವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT