ಯೋಜನೆಯನ್ನು ವಿರೋಧಿಸಿ ಪರಿಸರವಾದಿ ಕೆ.ಎನ್. ಸೋಮಶೇಖರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಕಳೆದ ಸೆಪ್ಟೆಂಬರ್ 21ರಂದು ತೀರ್ಪು ಕಾದಿರಿಸಿದ್ದ ಡಾ.ಜವಾದ್ ರಹೀಂ ನೇತೃತ್ವದ ಹಸಿರು ಪೀಠವು, ತಜ್ಞ ಸದಸ್ಯ ರಂಜನ್ ಚಟರ್ಜಿ ಅವರು ನಿವೃತ್ತರಾಗಲಿದ್ದ ಕಾರಣ ಅಕ್ಟೋಬರ್ 6ರಂದು ತೀರ್ಪು ಪ್ರಕಟಿಸಿ, ಷರತ್ತುಗಳನ್ನು ನಂತರ ಘೋಷಿಸುವುದಾಗಿ ಹೇಳಿತ್ತು.