ಅಲ್ಲದೆ, ‘ವೀರಶೈವ–ಲಿಂಗಾಯತ ಭೇದ ನಮಗಿಲ್ಲ. ಧರ್ಮ ಸ್ಥಾಪಕರು ಯಾರೆಂಬ ವಾದ–ವಿವಾದ ನಮಗೆ ಬೇಕಿಲ್ಲ. ಸಮಾಜ ಸಂಘಟನೆಯೇ ನಮ್ಮ ಗುರಿ. ಸಮಾಜ ಕಟ್ಟುವುದೇ ನಮ್ಮ ಕೆಲಸ ವಿನಹ ಒಡೆಯುವುದಲ್ಲ. ಈ ಬಗ್ಗೆ ಸಮಾಜದ ಬಂಧುಗಳು ಗೊಂದಲಕ್ಕೆ ಒಳಗಾಗದಂತೆ ಮನವಿ ಮಾಡಬೇಕು’ ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.