ಮೆಡಿಕಲ್ ಕಾಲೇಜಿನ ಎಆರ್ ಟಿ ಆಪ್ತ ಸಮಾಲೋಚಕ ಎಚ್.ಕೆ.ಶಿವಶಂಕರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರು ಹಣದ ಹಿಂದೆ ಬಿದ್ದು ಆರೋಗ್ಯದ ಕಡೆ ಗಮನಹರಿಸುತ್ತಿಲ್ಲ. ಜೀವನ ಶೈಲಿ ಬದಲಾಯಿಸಿಕೊಂಡು ಪೌಷ್ಟಿಕ ಆಹಾರ ತೆಗೆದುಕೊಳ್ಳುವಲ್ಲಿ ಹಿಂದೆ ಸರಿಯುತ್ತಿದ್ದಾರೆ. ದೈಹಿಕ ಕ್ರೀಡೆಗಳಾದ ಲಗೋರಿ, ಚಿನ್ನಿ ದಾಂಡು, ಕುಂಟೆ ಬಿಲ್ಲೆ ಹೀಗೆ ಇತರೆ ಆಟಗಳಿಗೆ ಮಹತ್ವ ಕೊಡದೆ ಮೊಬೈಲ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ಎಚ್ಚರಿಸಿದರು.