ಮಳವಳ್ಳಿಯ ಸಿದ್ದು ಅಲಿಯಾಸ್ ನಾಗರಾಜ್ (25), ಇಟ್ಟಮಡುವಿನ ಸತೀಶ್ ಅಲಿಯಾಸ್ ಸತ್ಯವೇಲು (43), ಉತ್ತರಹಳ್ಳಿಯ ಬಾಬು (25) ಹಾಗೂ ಕತ್ರಿಗುಪ್ಪೆಯ ಸುರೇಶ್ (32) ಬಂಧಿತರು. ಇವರ ಬಂಧನದಿಂದ ರಾಜರಾಜೇಶ್ವರಿನಗರ, ಕೋಣನಕುಂಟೆ ಹಾಗೂ ಬಸವೇಶ್ವರನಗರ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ಹೇಳಿದ್ದಾರೆ.