ಬದುಕಿನ ಘಟನೆಗಳು ನಡೆಯುವಾಗ ಕುಣಿಯುವವರ ತಲ್ಲೀನತೆ, ಉದ್ವಿಗ್ನಿತೆಗಳಲ್ಲಿ ಮುಳುಗಿರುವ ನಾವು–ನೀವು ಘಟನೋತ್ತರ ಸ್ಥಿತಿಯಲ್ಲಿ ಕುಳಿತು ಯೋಚಿಸಿದಾಗ ಒಂದೊಂದು ಮಾತು–ಸನ್ನಿವೇಶಗಳು ಬೇರೆಯದೇ ಬಣ್ಣ ಕಳಚುವ ಸ್ಥಿತಿಯಲ್ಲಿ ಕಾಣತೊಡಗುತ್ತವೆ. ಲೇಖಕರೂ ತಮ್ಮ ಹನ್ನೊಂದೂ ಪ್ರಬಂಧಗಳಲ್ಲಿ ಬದುಕಿನಲ್ಲಿ ಕಂಡ ಪ್ರಸಂಗಗಳನ್ನೇ ಕಟ್ಟಿಕೊಟ್ಟಿದ್ದಾರೆ. ಅದರಲ್ಲಿ ಬೇರೆ ಬೇರೆ ಮುಖಗಳು, ವೇಷಗಳು ಕಂಡರೂ ನಮ್ಮ ಮುಖವನ್ನು ನಾವೇ ನೋಡಿಕೊಳ್ಳುವ ಅನುಭವ ನೀಡುತ್ತದೆ.