ಗ್ರಾಮಸ್ಥರ ಪ್ರತಿಭಟನೆ: ‘ಮಹಿಳೆ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ಇಂಥ ಘಟನೆಗಳು ಮತ್ತೆ ಮರುಕಳಿಸಬಾರದು, ನಮಗೆ ನ್ಯಾಯ ದೊರಕುವವರೆಗೂ ಶವ ಹಿಂಪಡೆಯುವುದಿಲ್ಲ’ ಎಂದು ಉತ್ತಂಬಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆಯ ಮುಂಭಾಗ ಶವವಿಟ್ಟು, ವೈದ್ಯರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದರು.