ಪಥಸಂಚಲನದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕೊಪ್ಪ ಡಿವೈಎಸ್ಪಿ ರವೀಂದ್ರನಾಥ ಜಹಗೀರದಾರ, ಕೊಪ್ಪ ಉಪ ವಿಭಾಗದ ಎಲ್ಲಾ ಸಿಬ್ಬಂದಿ ಪಥಸಂಚಲನದಲ್ಲಿ ಭಾಗವಹಿಸಿದ್ದಾರೆ.ಮುಂದಿನ ದಿನಗಳಲ್ಲಿ ವಿಭಾಗದ ಎಲ್ಲಾ ಕಡೆಗಳಲ್ಲೂ ಪಥಸಂಚಲನ ನಡೆಸಲಾಗುವುದು.ಉಪವಿಭಾಗದ ಆರು ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆದಿದ್ದು ಸಿಆರ್ ಪಿಎಫ್ ಯೋದರೊಂದಿಗೆ ಪೊಲೀಸರೂ ತಪಾಸಣೆ ನಡೆಸಲಿದ್ದಾರೆ. ಚುನಾವಣಾ ಆಕ್ರಮಗಳು ನಡೆಯದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು ಪ್ಲೇಯಿಂಗ್ ಸ್ಕ್ವಾಡ್ ರಚಿಸಲಾಗಿದೆ.ಚುನಾವಣೆ ಘೋಷಣೆಯಾದ ಬಳಿಕ ಹಲವು ಅಕ್ರಮ ಮಧ್ಯ ಪ್ರಕರಣ ದಾಖಲಿಸಿದ್ದು,ಪರವಾನಗಿ ರಹಿತ ಕೋವಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.