‘ಆದೇಶದ ಮೂಲ ಉದ್ದೇಶ ಮತದಾರರ ಮೇಲೆ ಆಮಿಷವೊಡ್ಡಲು ಅಥವಾ ಅವರನ್ನು ದುರ್ಬಳಕೆ ಮಾಡಿಕೊಳ್ಳಲು ಅಂಥ ಹಣ ಬಳಕೆ ಆಗಬಾರದು ಎಂಬುದು. ಆದರೆ, ಬಹುತೇಕ ಗ್ರಾಹಕರು ಅದನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಸಾಧ್ಯತೆ ಇದೆ. ಒಂದು ಖಾತೆಯಿಂದ ಇನ್ನೊಂದು ಖಾತೆಗೆ ನಿರ್ದಿಷ್ಟ ಉದ್ದೇಶದ ಮೇಲೆ ಹಣ ವರ್ಗಾವಣೆ ಮಾಡಿದರೆ ಏನೂ ಸಮಸ್ಯೆ ಇಲ್ಲ. ಅದಕ್ಕೆ ತೆರಿಗೆ ಅನ್ವಯವಾಗುವಂತಿದ್ದರೆ ಅದರ ದಾಖಲೆಗಳನ್ನೂ ಇರಿಸಿಕೊಳ್ಳಬೇಕು’ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಾಬುರಾವ್ ಹೇಳಿದರು.