‘ಸರದಿ ಸಾಲಿನಲ್ಲಿ ನಿಂತು ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದೆ. ಆದರೆ ಅರ್ಜಿ ಹಾಕದೇ ಇರುವವರಿಗೆ ಟಿಕೆಟ್ ನೀಡಲಾಗಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ ಅಂಬರೀಷ್, ಇದು ನನ್ನ ಕಡೆಯ ಚುನಾವಣೆ, ಮುಂದೆ ನಿನಗೇ ಟಿಕೆಟ್ ಎಂದು ಹೇಳಿದ್ದರು. ಹೀಗಾಗಿ ನಾನು ಅವರ ಪರವಾಗಿ ಕೆಲಸ ಮಾಡಿ ಗೆಲುವಿಗೆ ಕಾರಣನಾಗಿದ್ದೆ. ಆದರೆ ಈಗ ಕಾಂಗ್ರೆಸ್ ಹಾಗೂ ಅಂಬರೀಷ್ ದ್ರೋಹ ಬಗೆದಿದ್ದಾರೆ. ಟಿಕೆಟ್ ನೀಡದಿದ್ದರೂ ನನ್ನ ಸ್ಪರ್ಧೆ ಖಚಿತ. ಬಂಡಾಯವಾಗಿ ಕಣಕ್ಕಿಳಿಯುತ್ತೇನೆ’ ಎಂದು ಗಣಿಗ ಪಿ.ರವಿಕುಮಾರ್ಗೌಡ ಹೇಳಿದರು.