ಪೆರ್ಮುದೆ ಭಟ್ರಕೆರೆಯ ಯಾದವ ಕೋಟ್ಯಾನ್ ಎಂಬವರ ಮನೆಯ ಅಣ್ಣಪ್ಪ ದೈವದ ಗುಡಿಯಿಂದ ಕಳ್ಳರ ತಂಡ ಚಿನ್ನ, ಬೆಳ್ಳಿ ವಜ್ರ ಖಚಿತ ಮೊಗವನ್ನು ಕಳವು ಮಾಡಿತ್ತು. ಮನೆಯ ಅಂಗಳದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದು, ಕಳ್ಳರ ಕೈಚಳಕ ಅದರಲ್ಲಿ ದಾಖಲಾಗಿತ್ತು. ಆದರೆ ರಾತ್ರಿ ಜೋರಾಗಿ ಮಳೆ ಸುರಿಯುತ್ತಿದ್ದರಿಂದ ಕಳ್ಳರ ಸ್ಪಷ್ಟ ಚಿತ್ರಣ ಗೋಚರವಾಗಿರಲಿಲ್ಲ. ಬಜ್ಪೆ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.