ವರಮಾನದ ಬಗ್ಗೆ ತಪ್ಪು ವಿವರ ದಾಖಲಿಸುವುದು, ಕಡಿತಗಳ ಬಗ್ಗೆ ಉತ್ಪ್ರೇಕ್ಷಿತ ಮಾಹಿತಿ ಸಲ್ಲಿಸುವುದು ಕಾನೂನುಬಾಹಿರವಾಗಿರಲಿದೆ. ದುರುದ್ದೇಶದಿಂದ ತಪ್ಪು ಮಾಹಿತಿ ನೀಡಿದವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ಉದ್ಯೋಗದಾತ ಸಂಸ್ಥೆಯ ಗಮನಕ್ಕೂ ತರಲಾಗುವುದು. ತಪ್ಪು ವಿವರ ನೀಡಿದವರ ವಿರುದ್ಧ ವಿಚಾರಣೆ ನಡೆಸಲೂ ಅವಕಾಶ ಇದೆ ಎಂದು ಇಲಾಖೆ ತಿಳಿಸಿದೆ.